ಪೋಸ್ಟ್‌ಗಳು

ಮೇ, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
ಕೆಂಡದ ಮೇಲಾಡುವ ದೈವ - ಒತ್ತೆಕೋಲ ಚರ ಣ್ ಐವರ್ನಾಡು              Vishnumurthy theyyam  ಸಂಸ್ಕøತಿಯೊಂದು ತಾನು ಹುಟ್ಟಿದ ಸಮುದಾಯ ಮತ್ತು ನೆಲೆಯನ್ನು ಮೀರಿ ಬೆಳೆಯುವುದು ಒಳ್ಳೆಯ ಲಕ್ಷಣ. ಇದು ಭಾಷೆಗೂ ಅನ್ವಯಿಸುತ್ತದೆ. ಕೊಡುಕೊಳ್ಳುವಿಕೆ ನಡೆಯದ ಹೊರತು ಭಾಷೆ ಮತ್ತು ಸಂಸ್ಕøತಿ ಬೆಳೆಯಲು ಸಾಧ್ಯವಿಲ್ಲ. ಭಾರತ ಸೇರಿದಂತೆ ವಿಶ್ವ ಜನಪದಗಳಲ್ಲಿ ಕಾಣುವ ಈ ಲಕ್ಷಣ ಆ ಸಂಸ್ಕøತಿಯ ಅಮೂಲಾಗ್ರ ಸ್ಥಿತ್ಯಂತರ ಮಾಡದೆ ಬೆಳೆಸಿದೆ. ಒಂದು ಸಮುದಾಯ ಬೆಳೆಸಿಕೊಂಡು ಬಂದ ಆಚರಣೆಗಳನ್ನು ಇತರ ಸಮುದಾಯಗಳು ಸ್ವೀಕರಿಸುವುದನ್ನು ಕೇರಳದ ತೆಯ್ಯಂನ ಒತ್ತೆಕೋಲವನ್ನು ತುಳುನಾಡಿನ ಸಮುದಾಯಗಳು ಸ್ವೀಕರಿಸಿದ ಬಗೆಯನ್ನು ಇಲ್ಲಿ ಉದಾಹರಿಸುತ್ತೇನೆ. ಬೇರೆ ಉದ್ದೇಶಕ್ಕಾಗಿ ಸಿದ್ದಪಡಿಸಿದ ಲೇಖನವನ್ನು ಇಲ್ಲಿ ಹಾಕಲಾಗಿದೆ                  ನಿಗಿ ನಿಗಿ ಕೆಂಡದ ರಾಶಿಯ ಮೇಲೆ   ಸರ್ವಾಲಂಕಾರಭೂಷಿತವಾದ ದೈವವೊಂದರ ಕಾರ್ಣಿಕವನ್ನು ನೋಡಲು ದಕ್ಷಿಣಕನ್ನಡ ಮತ್ತು ಕೇರಳದ ಗಡಿ ಪ್ರದೇಶಗಳಿಗೆ ಬರಬೇಕು . ಇಲ್ಲಿತಾವು ನಂಬಿದ ದೈವ ಮೈದಳೆದು ತಮ್ಮ ಎದುರು ನಿಂತಾಗ ಭಕ್ತರು ಭಾವುಕರಾಗಿ ಮೈಮರೆಯುತ್ತಾರೆ ! ಸ್ವತಃ ಮಹಾವಿಷ್ಣು ಧರೆಗೆ ಇಳಿದು ಬರುವ ವಿಶಿಷ್ಟ ಜಾನಪದ ಆಚರಣೆ ಒತ್ತೆಕೋಲ ! ...
ಇಮೇಜ್
ಬಹುತ್ವದ   ಪ್ರತೀಕಗಳಾಗಿ   ಜಾನಪದ ರಾಮಾಯಣ - ಮಹಾಭಾರತಗಳು ಚರಣ್ ಐವರ್ನಾಡು                                          ಬಹುಮುಖಿ ಸಂಸ್ಕೃತಿ , ಬಹುಭಾಷಿಕತೆಯನ್ನು ಹೊಂದಿರುವ ಭಾರತದಲ್ಲಿ ಒಂದೇ ಸಂಸ್ಕೃತಿ ಎಂಬ ಏಕಮುಖೀಯ ಚಿಂತನೆ ಒಗ್ಗಿ ಬರುವುದಿಲ್ಲ. ಪ್ರಬಲ ಸಂಸ್ಕೃತಿಯೊಂದರ ಮೂಲಕ ಭಿನ್ನ ನೆಲೆಗಳ ಸಂಸ್ಕೃತಿಯನ್ನು ನಿರ್ಧರಿಸುವುದು. ಆರೋಗ್ಯಕರವಲ್ಲ. ಸಾಂಸ್ಕೃತಿಕ ಭಿನ್ನತೆಯುಳ್ಳ ಈ ದೇಶದಲ್ಲಿ ಪ್ರತಿಯೊಂದು ಭಾಷೆ,ಜನಾಂಗ ತನ್ನವೇ ಆದ ಕಾವ್ಯ,ಇತಿಹಾಸ,ಪುರಾಣಗಳನ್ನು ಹೊಂದಿವೆ.ಇವೇ ಅವರ ಜೀವನ ಶೈಲಿಯನ್ನು ರೂಪಿಸುತ್ತಾ ಬಂದಿವೆ. ಬಹುತೇಕ ಎಲ್ಲಾ ಭಾಷೆಗಳಲ್ಲಿ ,ಜನಾಂಗಗಳಲ್ಲಿ ಕಾಣುವ ವಿಶೇಷತೆ ಎಂದರೆ ನಮ್ಮ ದೇಶದ ಶಿಷ್ಟ ಕಾವ್ಯಗಳೆನಿಸಿದ ರಾಮಾಯಣ – ಮಹಾಭಾರತಗಳ ಪ್ರಭಾವ. ನಮ್ಮಲ್ಲಿ ವಿವಿಧ ಸಮುದಾಯಗಳು ತಮ್ಮ ತಮ್ಮ ಭಾಷೆಗಳಲ್ಲಿ ಈ ಕಾವ್ಯಗಳನ್ನು ತಮಗೆ ಬೇಕಾದಂತೆ ಬರೆದುಕೊಂಡಿವೆ. ಅವು ಮೂಲ ಕರ್ತೃಗಳ ಪಠ್ಯಕ್ಕಿಂತ ಭಿನ್ನವಾಗಿ ಸಮುದಾಯದ ಬದುಕಿಗೆ ಹತ್ತಿರವಾಗಿರುವಂತೆ ಬರೆಯಲ್ಪಟ್ಟಿರುವುದು ಈ ನೆಲದ ಬಹುತ್ವಕ್ಕೆ ಹಿಡಿದ ಕೈಗನ್ನಡಿ.                     ಜಾನಪದದಲ್ಲಿ ಕಂಡು ಬರ...
ಇಮೇಜ್
ಬಹುರೂಪಿ ಭಾರತ  Varanasi, Kashi one of the Moxadayi Xetra                                        ನಮ್ಮ ದೇಶದಲ್ಲಿ ರಾಷ್ಟ್ರೀಯತೆಯ ಬಗೆಗಿನ ಚರ್ಚೆ ರಾಜಕೀಯ ಮತ್ತು ಮತೀಯ ಸ್ವರೂಪವನ್ನು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸಾಂಸ್ಕøತಿಕ ನೆಲೆಯಲ್ಲಿ ರಾಷ್ಟ್ರೀಯತೆಯನ್ನು ನಿರೂಪಿಸುವ ಅಗತ್ಯತೆ ತುಂಬಾ ಇದೆ. ಇತರ ದೇಶಗಳಂತೆ ಏಕರೂಪದ ಮಾನದಂಡದಿಂದ ಭಾರತದ ಸಮಗ್ರತೆಯನ್ನು, ರಾಷ್ಟ್ರೀಯ ಪರಿಕಲ್ಪನೆಯನ್ನು ಅಳತೆ ಮಾಡಲು ಸಾಧ್ಯವಿಲ್ಲ. ರಾಷ್ಟ್ರವೊಂದರ ಸಾಮಾನ್ಯ ಲಕ್ಷಣಗಳಾದ - ಏಕ ಭಾಷೆ, ಏಕ ಮತ, ಏಕ ಸಂಸ್ಕøತಿ, ಕೇಂದ್ರೀಕೃತ ಆಡಳಿತ ವ್ಯವಸ್ಥೆ ಮಾತ್ರವಲ್ಲ ಇತ್ತೀಚೆಗೆ ಆತಂಕಕಾರಿಯಾಗಿ ಬೆಳೆಯುತ್ತಿರುವ ಏಕರೂಪದ ರಾಜಕೀಯ, ಸಾಮಾಜಿಕ ಚಿಂತನೆಗಳು, ಒಂದೇ ರಾಜಕೀಯ ಪಕ್ಷ ಮೊದಲಾದವುಗಳು ಭಾರತದಂತಹ ಬಹು ಸಂಸ್ಕøತಿಯ ರಾಷ್ಟ್ರದಲ್ಲಿ ಬೆಳೆಯಲು ಸಾಧ್ಯವಿಲ್ಲ. ಆದರೂ ಈ ಚಿಂತನೆಗಳನ್ನು ಬಲವಂತವಾಗಿ ಹೇರುವ ಯತ್ನಗಳು ನಡೆಯುತ್ತಿದ್ದು ಭಾರತಕ್ಕೆ ಇದು ಮಾರಕವಾಗಿ ಪರಿಣಮಿಸುತ್ತದೆ. ಸಾಂಸ್ಕøತಿಕವಾಗಿ ಮತ್ತು ಆದ್ಯಾತ್ಮಿಕವಾಗಿ ಭಾರತ ಅನೇಕತೆಯನ್ನು ಕಳೆದುಕೊಳ್ಳುತ್ತದೆ.                         ನಾನು ಭಾರತದ ...