ಕದ್ರಿಯ ಲೋಕೇಶ್ವರ ಮತ್ತು ಮಂಜುನಾಥ
ಕದ್ರಿಯ ಲೋಕೇಶ್ವರ ಮತ್ತು ಮಂಜುನಾಥ (ತುಳುನಾಡಿನ ಬೌದ್ಧ ಕುರುಹುಗಳ ಬಗ್ಗೆ ಬರೆದ ಲೇಖನದ ಒಂದು ಭಾಗ) Avalokitheshwara, Kadri Manjunatah Temple ಕದ್ರಿಯ ಮಂಜುನಾಥ ದೇವಾಲಯ ಅತ್ಯಂತ ಪ್ರಸಿದ್ಧ ಪುಣ್ಯಕ್ಷೇತ್ರ. ಅದೊಂದು ಲಿಂಗಾರಾಧನೆಯ ಶೈವಕ್ಷೇತ್ರವಾದರೂ ಶಿವನಿಗೆ ಮಂಜುನಾಥ ಎಂಬ ಹೆಸರು ಯಾವುದೇ ಪ್ರಾಚೀನ ದಾಖಲೆಗಳಲ್ಲಿ ಇಲ್ಲ. ಗೋವಿಂದ ಪೈಗಳು ಪ್ರಾಚೀನ ಶಿವಸಹಸ್ರನಾಮದಲ್ಲೂ ಇಲ್ಲವೆನ್ನುತ್ತಾರೆ. ಕದಿರೆಯ ಮಂಜುನಾಥನೊಬ್ಬನೇ ಅಖಿಲಭಾರತದಾದ್ಯಂತ ಇರುವ ಏಕೈಕ ಮಂಜುನಾಥನ ಲಿಂಗ. ಧರ್ಮಸ್ಥಳಕ್ಕೆ ದೇವರನ್ನು ಇಲ್ಲಿಂದಲೇ ಕೊಂಡುಹೋದದ್ದು. ಶಿವನಿಗೆ ಮಂಜುನಾಥನೆಂಬ ಹೆಸರು ಬರಲು ಕಾರಣವನ್ನು ಗೋವಿಂದ ಪೈಗಳು ವಿಸ್ತøತವಾಗಿ ಹೀಗೆ ಚರ್ಚಿಸುತ್ತರೆ. ಮಂಜುಶ್ರೀ ಅಥವಾ ಮಂಜುಘೋಷನೆಂಬ ಬೋಧಿಸತ್ವನಿಗೆ ಮಂಜುನಾಥ ಎಂಬ ಹೆಸರು ಇದ್ದದ್ದು ಮಹಾಯನದ ಕೃತಿಗಳಿಂದ ತಿಳಿದು ಬರುತ್ತದೆ. ನೇಪಾಳದ ಬೌದ್ಧಕವಿ ಅಮೃತಾನಂದನ ಕಲ್ಯಾಣಪಂಚವಿಂಶತಿಕಾ ಸ್ತೋತ್ರದ ಸ್ರಗ್ಧರೆಯೊಂದರಲ್ಲಿ.......ಸ್ವಸ್ತೀಭೂತಾಬ್ಜಸಂಸ್ಥಂ ಸಕಲ ಜಿನವರಂ ಪ್ರಾಭಜನ್ ಮಂಜುನಾಥಃ......ಎಂದಿದೆ. ಮಂಜುನಾಥವೆಂಬುದು ಕದ್ರಿಯ ಗುರು ಮಚ್ಚೇಂದ್ರನಾಥನಿಂದಲೂ ಬಂದಿರಬಹುದು. ಮಚ್ಚಿನಾಥವೇ ಮಂಜುನಾಥವಾಗಿರಹುದೆಂಬ ಚರ್ಚೆಯೂ ಇದೆ. ದೇವಾಲಯದ ಗರ್ಭಗುಡಿಯ ಹೊರ ಅಂತಃಪ್ರಾಕಾರದಲ್ಲಿ ಅತ್ಯಂತ ಸುಂದರವಾದ ಲೋಕೇಶ್ವರನ ಕಂಚಿನ ವಿಗ್ರಹವಿದೆ. ಇದನ್ನು ಅರ್ಚಕರು ತ್ರಿಲೋಕೇಶ್ವರನೆಂದು ಕರೆಯುತ್ತಾರೆ. ಅಡಿ...