ಪೋಸ್ಟ್‌ಗಳು

2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕದ್ರಿಯ ಲೋಕೇಶ್ವರ ಮತ್ತು ಮಂಜುನಾಥ

ಇಮೇಜ್
  ಕದ್ರಿಯ ಲೋಕೇಶ್ವರ ಮತ್ತು ಮಂಜುನಾಥ (ತುಳುನಾಡಿನ ಬೌದ್ಧ ಕುರುಹುಗಳ ಬಗ್ಗೆ ಬರೆದ ಲೇಖನದ ಒಂದು ಭಾಗ) Avalokitheshwara, Kadri Manjunatah Temple ಕದ್ರಿಯ ಮಂಜುನಾಥ ದೇವಾಲಯ ಅತ್ಯಂತ ಪ್ರಸಿದ್ಧ ಪುಣ್ಯಕ್ಷೇತ್ರ. ಅದೊಂದು ಲಿಂಗಾರಾಧನೆಯ ಶೈವಕ್ಷೇತ್ರವಾದರೂ ಶಿವನಿಗೆ ಮಂಜುನಾಥ ಎಂಬ ಹೆಸರು ಯಾವುದೇ ಪ್ರಾಚೀನ ದಾಖಲೆಗಳಲ್ಲಿ ಇಲ್ಲ. ಗೋವಿಂದ ಪೈಗಳು ಪ್ರಾಚೀನ ಶಿವಸಹಸ್ರನಾಮದಲ್ಲೂ ಇಲ್ಲವೆನ್ನುತ್ತಾರೆ. ಕದಿರೆಯ ಮಂಜುನಾಥನೊಬ್ಬನೇ ಅಖಿಲಭಾರತದಾದ್ಯಂತ ಇರುವ ಏಕೈಕ ಮಂಜುನಾಥನ ಲಿಂಗ. ಧರ್ಮಸ್ಥಳಕ್ಕೆ ದೇವರನ್ನು ಇಲ್ಲಿಂದಲೇ ಕೊಂಡುಹೋದದ್ದು. ಶಿವನಿಗೆ ಮಂಜುನಾಥನೆಂಬ ಹೆಸರು ಬರಲು ಕಾರಣವನ್ನು ಗೋವಿಂದ ಪೈಗಳು ವಿಸ್ತøತವಾಗಿ ಹೀಗೆ ಚರ್ಚಿಸುತ್ತರೆ. ಮಂಜುಶ್ರೀ ಅಥವಾ ಮಂಜುಘೋಷನೆಂಬ ಬೋಧಿಸತ್ವನಿಗೆ ಮಂಜುನಾಥ ಎಂಬ ಹೆಸರು ಇದ್ದದ್ದು ಮಹಾಯನದ ಕೃತಿಗಳಿಂದ ತಿಳಿದು ಬರುತ್ತದೆ. ನೇಪಾಳದ ಬೌದ್ಧಕವಿ ಅಮೃತಾನಂದನ ಕಲ್ಯಾಣಪಂಚವಿಂಶತಿಕಾ ಸ್ತೋತ್ರದ ಸ್ರಗ್ಧರೆಯೊಂದರಲ್ಲಿ.......ಸ್ವಸ್ತೀಭೂತಾಬ್ಜಸಂಸ್ಥಂ ಸಕಲ ಜಿನವರಂ ಪ್ರಾಭಜನ್ ಮಂಜುನಾಥಃ......ಎಂದಿದೆ. ಮಂಜುನಾಥವೆಂಬುದು ಕದ್ರಿಯ ಗುರು ಮಚ್ಚೇಂದ್ರನಾಥನಿಂದಲೂ ಬಂದಿರಬಹುದು. ಮಚ್ಚಿನಾಥವೇ ಮಂಜುನಾಥವಾಗಿರಹುದೆಂಬ ಚರ್ಚೆಯೂ ಇದೆ. ದೇವಾಲಯದ ಗರ್ಭಗುಡಿಯ ಹೊರ ಅಂತಃಪ್ರಾಕಾರದಲ್ಲಿ ಅತ್ಯಂತ ಸುಂದರವಾದ ಲೋಕೇಶ್ವರನ ಕಂಚಿನ ವಿಗ್ರಹವಿದೆ. ಇದನ್ನು ಅರ್ಚಕರು ತ್ರಿಲೋಕೇಶ್ವರನೆಂದು ಕರೆಯುತ್ತಾರೆ. ಅಡಿ...

ಬಳ್ಪ ತ್ರಿಶೂಲಿನಿ ದೇವಾಲಯ- ಶಾಕ್ತ ಕ್ಷೇತ್ರ

ಇಮೇಜ್
ಬಳ್ಪ ತ್ರಿಶೂಲಿನಿ ದೇವಾಲಯ- ಶಾಕ್ತ ಕ್ಷೇತ್ರ ಈಗ ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿ ಇರುವ ತ್ರಿಶೂಲಿನಿ ದೇವಾಲಯ ಒಂದು ಶಾಕ್ತ ಕ್ಷೇತ್ರ. ಇಲ್ಲಿ ಶಕ್ತಿಯನ್ನು ಶಿಲೆಯ ತ್ರಿಶೂಲದ ರೂಪದಲ್ಲಿ ಆರಾಧಿಸುತ್ತಾರೆ. ಇಲ್ಲಿರುವ ಲಕುಲೀಶನ, ಮೈಥುನದ ಕೆತ್ತನೆಗಳು ಇದರ ತಾಂತ್ರಿಕ ಹಿನ್ನಲೆಯನ್ನು ತೋರಿಸುತ್ತದೆ. ಇದರ ಸುತ್ತು ಪೌಳಿ ವಿಜಯನಗರ ರಾಜರ ಕೊಡುಗೆಯಾದರೆ ಸುಖಾಸಿನಿ, ತೀರ್ಥ ಮಂಟಪ, ಗರ್ಭಗೃಹ ಆಳುಪ ಮತ್ತು ಕದಂಬ ವಾಸ್ತುಶಿಲ್ಪವನ್ನು ಹೋಲುತ್ತದೆ. ಈ ದೇವಾಲಯಕ್ಕೆ ವಿಜಯನಗರದ ದೇವರಾಯ ಒಡೆಯ 1493 ರಲ್ಲಿ ಕೊಡುಗೆಗಳನ್ನು ನೀಡಿದ್ದಾನೆ. ಇಲ್ಲಿರುವ ದುರ್ಗಾಪರಮೇಶ್ವರಿ ದೇವಾಲಯದ ಮುಂದೆ ಕೊಡಗಿನ ಹಾಲೇರಿ ಅರಸರ ಶಾಸನ ಕೂಡ ಇದೆ. Inscription of Kodagu Haleri King ಕಾಪಾಲಿಕ, ಪಾಶುಪತ, ಲಾಕುಲ, ಕಾಳಾಮುಖ ಮೊದಲಾದ ಮಧ್ಯಕಾಲೀನ ಶೈವ ತಾಂತ್ರಿಕ ಪಂಥಗಳು ಉಚ್ಛ್ರಾಯ ದಲ್ಲಿ ಇದ್ದಾಗ ಬಳ್ಪ ಒಂದು ಪ್ರಮುಖ ಶಾಕ್ತ ಕೇಂದ್ರ. ಬಳ್ಪ ದಂಡಿನಲ್ಲಿ ಉದ್ದ ಕಾಲಾಳುಗಳಿಗೆ ತರಬೇತಿ ನೀಡುವ ಕೇಂದ್ರ. ತ್ರಿಶೂಲಿನಿ ಸೈನಿಕರು ಆರಾಧನೆ ಮಾಡುವ ದೇವತೆ.  ಈ ದೇವಾಲಯದಿಂದ 15 km ದೂರದಲ್ಲಿ ಇರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಒಂದು ಪ್ರಮುಖ ಕಾಳಾಮುಖಾದಿ ತಾಂತ್ರಿಕ ಕೇಂದ್ರವಾಗಿದ್ದು ಅಲ್ಲಿ ಸ್ಥಾನಿಕ ಬ್ರಾಹ್ಮಣರ ಮೂಲಕ ಆರಾಧನೆ ನಡೆಯುತ್ತಿತ್ತು. ಸ್ಥಾನಿಕರು ಮೂಲತಃ ಕಾಳಾಮುಖ ಪಂಥದವರು ಎಂಬ ಚರ್ಚೆ ಇದೆ. ಹಾಗಾಗಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಭಸ್ಮ ಕೊಡುತ...