ಪೋಸ್ಟ್‌ಗಳು

ಜುಲೈ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನ್ನಡಂಗಳಲ್ಲಿ ಅರೆಭಾಷೆ

ಇಮೇಜ್
ಅರೆಭಾಷೆಯನ್ನು ಕನ್ನಡದ ಪ್ರಬೇಧ ಎಂದು ಬಗೆದರೂ ಇದು ಸಾಂಸ್ಕøತಿಕವಾಗಿ ಇತರ ಕನ್ನಡಗಳಿಂದ ಅನನ್ಯತೆಯನ್ನು ಕಾಯ್ದುಕೊಳ್ಳುವುದರಿಂದಾಗಿ ನಾನು ಇದನ್ನು ಅಧ್ಯಯನ ಕಾರಣಕ್ಕೆ ಹೊರತುಪಡಿಸಿ ಉಪಭಾಷೆ (ಡೈಲೆಕ್ಟ್) ಎಂದು ಕರೆಯುವ ಬಗ್ಗೆ ತಕರಾರು ಮಾಡುತ್ತೇನೆ.  ಒಂದು ಭಾಷೆ ಸಂಸ್ಕøತಿಯ ಮೂಲಕ ಸಂವಹನ ನಡೆಸುವಂತೆ ಸಂಸ್ಕøತಿಯೂ ಭಾಷೆಯ ಮೂಲಕ ಸಂವಹನ ನಡೆಸುತ್ತದೆ. ಭಾಷೆಯಿಲ್ಲದೆ ಸಂಸ್ಕøತಿಗೆ ಉಳಿಗಾಲವಿಲ್ಲ. ಹಾಗಾಗಿ ಭಾಷೆಯನ್ನು ಕಲಿಯುವುದು ಎಂದರೆ ಸಂವಹನದ ಆಚೆಗೆ ಅದರ ಸಂಸ್ಕøತಿಯನ್ನು ಅರಿಯುವ ಯತ್ನ ಎಂದೇ ಭಾವಿಸಬೇಕು. ಅರೆಭಾಷೆ ಒಂದುಸಮುದಾಯದ ಭಾಷೆ. ಆದರೆ ಒಂದು ಭಾಷೆ ಸಮುದಾಯ, ಧರ್ಮಗಳ ಆವರಣವನ್ನು ಮೀರದೇ ಇದ್ದರೆ ಉಳಿಯುವುದಿಲ್ಲ. ಅರೆಭಾಷೆ ಪ್ರಸಕ್ತ ಸಂದರ್ಭದಲ್ಲಿ ಈ ಮಿತಿಗಳನ್ನು ಮೀರುವ ಪ್ರಜ್ಞೆಯನ್ನು ಬೆಳೆಸಿಕೊಂಡಿದೆ.  ಹೀಗಾಗಿ ಅರೆಭಾಷೆಯ ಬಗ್ಗೆ ನಾನು ಮಾಡಿದ ಒಂದು ಟಿಪ್ಪಣಿಯನ್ನು ಇಲ್ಲಿ ನೀಡಿದ್ದೇನೆ. ಭಾಷೆಯ ಬಗ್ಗೆ ಚರ್ಚೆಯನ್ನು ಬೆಳೆಸಲು ಉಪಯೋಗವಾಗಬಹುದು ಎಂದು ನಂಬಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬಂಟ್ವಾಳ, ವಿಟ್ಲ, ಕೇರಳದ ಕಾಸರಗೋಡು ಮತ್ತು ಕೊಡಗಿನ ಅನೇಕ ಕಡೆ ವಾಸಿಸುವ ಗೌಡರದ್ದು ಈ ಭಾಗಗಳ ಪ್ರಭಾವಿ ಸಮುದಾಯ. ಇವರು ಹಾಸನ ಪರಿಸರದ ಐಗೂರು ಸೀಮೆಯಿಂದ ಕ್ರಿ.ಶ 1450-1600ರ ಮಧ್ಯೆ ಕರಾವಳಿಗೆ ವಲಸೆ ಬಂದಿದ್ದಾರೆ.                  ...

ಮರುದೈ ವೀರನ್ - ಪ್ರಭುತ್ವದ ಅನ್ಯಾಯಕ್ಕೆ ಬಲಿಯಾದ ತಮಿಳು ವೀರನ ಕಥೆ

ಇಮೇಜ್
ನಮ್ಮ ಮನೆಯ ಮುಂದಿನ ಗುಡ್ಡದ ಆಚೆ ತಮಿಳು ಮಾತನಾಡುವ ಸಮುದಾಯ ಒಂದಿದೆ. ಎಂಬತ್ತರ ದಶಕದಲ್ಲಿ ಈ ಭಾಗಕ್ಕೆ ಬಂದವರು. ಅವರು ಮಾರಿಯಮ್ಮನಿಗೆ ಗುಡಿ ಕಟ್ಟಿ ಆರಾಧಿಸುತ್ತಿದ್ದಾರೆ. ಅದು ಕೆಲವು ವರ್ಷಗಳ ವರೆಗೆ ಜೀರ್ಣಾವಸ್ತೆಯಲ್ಲಿಯೇ ಇತ್ತು. ಇತ್ತೀಚೆಗೆ ಹೊಸ ದೇಗುಲ ಸಂಕೀರ್ಣ ಕಟ್ಟಿ ಗಣಪತಿ ಮೊದಲಾದ ದೇವತೆಗಳನ್ನೂ ಪ್ರತಿಷ್ಠಾಪಿಸಿ ಪ್ರಾಣಿ ಬಲಿ ಕೇಳುವ ದೇವತೆಗಳಿಗೆ ಬ್ರಾಹ್ಮಣ ಅರ್ಚಕರಿಂದ ಪೂಜೆಯ ವ್ಯವಸ್ಥೆ ಮಾಡಿದ್ದಾರೆ. ಇವರು ತಮ್ಮ ಕುಟುಂಬದ ರಕ್ಷಣೆಯ ದೈವ ಎಂದು ಗುಡ್ಡದ ತುದಿಯಲ್ಲಿ ಕಲ್ಲು ಹಾಕಿ ಒಂದು ದೇವತೆಗೆ ಆರಾಧನೆ ಮಾಡುತ್ತಾರೆ. ವರ್ಷಕ್ಕೆ ಒಮ್ಮೆ ಆಡು ತಲೆ ಕಡಿದು ಅದರ ಮಾಂಸದಿಂದ ಮಾಡಿದ ಅಡುಗೆಯ ಎಡೆ ಇಡುತ್ತಾರೆ. ಯಾರು ಈ ಮರುದೈ ವೀರನ್? ಅದು ಮರುದೈ ವೀರನ್ ಎಂಬ ದೇವತೆಯ ಕಲ್ಲು. ಆರಾಧನೆ ಮಾಡುವಾಗ ಮರುದೈ ವೀರನ್ ಪಾತ್ರಿಯ ಮೇಲೆ ಅವಾಹನೆಯಾಗಿ ಕತ್ತಿಯ ಮೇಲೆ ನಿಲ್ಲುವ, ಹುರಿ ಹಗ್ಗದಿಂದ ಮೈಮೇಲೆ ಬಾಸುಂಡೆ ಬರುವಂತೆ ಹೊಡೆದುಕೊಳ್ಳುವ, ಚರ್ಮದ ವಾದ್ಯ ಭಾರಿಸುವ ಮತ್ತು ಎಲ್ಲಾ ಭಕ್ತರಿಗೂ ಭಸ್ಮದ ಉದ್ದದ ನಾಮ ಹಾಕುವ ಕ್ರಮ ನಡೆಯುತ್ತದೆ. ಇದನ್ನು ಮಾಡುವಾಗ ತುಳುವಿನ ದೈವಗಳು ಹಾಡುವ ಪಾಡ್ಡನದಂತಹ ಹಾಡು ನಿರರ್ಗಳವಾಗಿ ಲಯಬದ್ಧವಾಗಿ ಹಾಡುತ್ತಾರೆ. ಮರುದೈ ವೀರನ್ ಒಬ್ಬ ಐತಿಹಾಸಿಕ ಪುರುಷ. ಇವನು ಮಧುರೆಯ ಒಬ್ಬ ವೀರ ಸೈನಿಕ. ಜಾನಪದರ ಬಾಯಲ್ಲಿ ಇವನು ಮರುದೈ ವೀರನ್ ಆಗಿದ್ದಾನೆ. ಇವರನ್ನು ನಿಯಂತ್ರಿಸಲು ರಾಜ ತಿರುಮಲೈ ನಾಯಗರ್ ಮರ ಕಡ...