ಪೋಸ್ಟ್‌ಗಳು

ಅಕ್ಟೋಬರ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
ತುಳುನಾಡಿನ ದೈವಾರಾಧನೆಯಲ್ಲಿ ಗೌಡ ಜನಾಂಗದ ಪಾತ್ರ ಸಂಸ್ಕೃತಿ ಎಂಬುದು ಸಮೂಹ ಸಮ್ಮತ ಜೀವನ ಪದ್ಧತಿ. ಈ ಜೀವನ ಕ್ರಮದೊಳಗೆ ಸಮಾಜದ ಎಲ್ಲ ವರ್ಗಗಳೂ ನಿರ್ದಿಷ್ಟ ಪಾಲನ್ನು ಪಡೆದುಕೊಂಡಿರುತ್ತವೆ. ಹಾಗಾಗಿ ಪ್ರತಿವರ್ಗವೂ ಆ ಸಂಸ್ಕ್ರತಿಯ ಅವಿಭಾಜ್ಯ ಅಂಗಗಳು. ಅವುಗಳ ಸಂಪೂರ್ಣ ಪಾಲುದಾರಿಕೆ ಸಂಸ್ಕೃತಿಯೊಂದನ್ನು ಬಹುಮುಖಿಯಾಗಿ ರೂಪಿಸುತ್ತದೆ. ತುಳುವರ ದೈವಾರಾಧನೆಯೂ ತುಳುವ ಸಮಾಜದ ವಿವಿಧ ಜಾತಿಗಳ, ಸಮುದಾಯಗಳ ಭಾಗವಹಿಸುವಿಕೆಯಿಂದ ರೂಪುಗೊಂಡು ಬೆಳೆದು ಬಂದಿದೆ.                ಧನಿಕ ವರ್ಗಗಳು ರಾಜಕೀಯ ಅಧಿಕಾರದಿಂದ ಸಮಾಜದ ವ್ಯವಸ್ಥೆಗಳ ಮೇಲೆ ಹಿಡಿತ ಸಾಧಿಸಿಕೊಂಡರೆ ಪುರೋಹಿತ ವರ್ಗ ಧಾರ್ಮಿಕ ಅಧಿಕಾರಗಳನ್ನು ಹೊಂದಿ ತುಳುವ ಸಮಾಜದ ಮೇಲ್ತುದಿಯಲ್ಲಿರುತ್ತಾರೆ. ತುಳುನಾಡಿನ ಸೀಮೆ, ಮಾಗಣೆ, ಗ್ರಾಮ, ಗುತ್ತು, ಬಾವ ಇವೆಲ್ಲವೂ ಜಾತಿ ಆಧಾರಿತ ಆಡಳಿತ ಘಟಕಗಳು. ಸೀಮೆ,ಮಾಗಣೆಗಳು ಜೈನರ ಕೈಯಲ್ಲಿದ್ದರೆ, ಗ್ರಾಮ-ಗುತ್ತುಗಳಲ್ಲಿ ಬಂಟರು ಕೆಲವೆಡೆ ಬಿಲ್ಲವರು ಮುಖ್ಯಸ್ಥರಾಗಿರುತ್ತಾರೆ. ಇವರಿಗೆ ಸಮಾನಾಂತರವಾಗಿ ಸುಳ್ಯ,ಪುತ್ತೂರು,ಬೆಳ್ತಂಗಡಿ ಭಾಗಗಳಲ್ಲಿ ಗೌಡ ಜನಾಂಗ ಬೆಳೆದು ಬಂದಿದೆ. ಆಶ್ಚರ್ಯವೆಂದರೆ ಯಜಮಾನ್ಯ ನೆಲೆಯಲ್ಲಿರುವ ಯಾವುದೇ ವರ್ಗಗಳೂ ತುಳುನಾಡಿನ ಮೂಲನಿವಾಸಿಗಳಲ್ಲ ಎಂಬುದು! ಈ ಎಲ್ಲಾ ಪ್ರಬಲ ವರ್ಗಗಳು ವಲಸೆ ಬಂದ ಸಮುದಾಯಗಳು. ಆದರೆ ಇವು ತಮ್ಮ ಮೂಲ ಸಂಸ್ಕೃತಿಯೊಂದಿಗೆ ತುಳುನ...
ಇಮೇಜ್
 ನಾಗಬನಗಳ ಸ್ಥಿತ್ಯಂತರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ಅದೆಷ್ಟೋ ಸಾವಿರ ಬನಗಳು ಹಾಗೂ ದೈವಗಳ ಬನಗಳು ಜೀರ್ಣೋದ್ಧಾರಗೊಂಡು ಕಟ್ಟೆಗಳು ಕಟ್ಟಲ್ಪಟ್ಟು ಹಾಸ್ಯಕ್ಕೆ ಎಡೆ ಮಾಡಿಕೊಡುತ್ತಿರುವುದು ದುರಂತ. ಕಾಡಿನಲ್ಲಿದ್ದ ನಾಗ ಕಾಂಕ್ರೀಟು ಕಟ್ಟೆಗಳ ಮೇಲೆ ವಿರಾಜಮಾನನಾಗಿದ್ದಾನೆ! ಒಟ್ಟಾರೆ ಇದು ಶ್ರದ್ಧೆ, ನಂಬಿಕೆಗಳನ್ನು ವಿಡಂಬನೆ ಮಾಡುವಂತೆ ತೋರುತ್ತಿವೆ. ಭಯ ಭಕ್ತಿಯನ್ನು ಹುಟ್ಟಿಸಬೇಕಾದ ಇವು ತಿರಸ್ಕಾರವನ್ನು ಸೃಷ್ಟಿಸುತ್ತಿವೆ. ಕಾಲನ ಚಕ್ರ ಉರುಳಿದಂತೆ, ಬದಲಾವಣೆಯ ಗಾಳಿ ಬೀಸಿದಂತೆ ನಂಬಿಕೆಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿರುವುದು ಖೇದಕರ ಸಂಗತಿ. ಇಂದು ಅಷ್ಟಮಂಗಲ, ಪ್ರಶ್ನಾಚಿಂತನಗಳಲ್ಲಿ ಪ್ರತಿಯೊಂದು ಕುಟುಂಬ, ಮನೆಗಳಿಗೂ ನಾಗದೋಷ ಇರುವುದು ಕಾಣುತ್ತಿದೆ. ಪ್ರಶ್ನೆಯವರು ಅದಕ್ಕೆ ಪರಿಹಾರವನ್ನೂ ನೀಡುತ್ತಾರೆ. ದೇವರು ನುಡಿದಂತೆ ನಾಗಬನಗಳನ್ನು ನವೀಕರಿಸುತ್ತೇವೆ. ಸರ್ಪ ಸಂಸ್ಕಾರ, ನಾಗ ಪ್ರತಿಷ್ಟೆ ಅಲ್ಲದೆ ಇತ್ತೀಚೆಗೆ ನಾಗಮಂಡಲಗಳನ್ನು ಮಾಡಲು ಹೇಳಿ ಲಕ್ಷಾಂತರ ರೂಪಾಯಿ ವ್ಯಯ ಮಾಡುತ್ತಾರೆ. ಇದರ ಜೊತೆಗೆ ಪೂರ್ವದ ಕಟ್ಟಳೆಗಳನ್ನೂ ಮುರಿಯುತ್ತಿದ್ದೇವೆ. ಆಲಡೆ ಹಾಗೂ ನಾಗಾಲಯಗಳು ಹಿಂದೆ ವನ ಪ್ರದೇಶದಲ್ಲಿದ್ದ ಪೂಜಾಸ್ಥಾನಗಳು ಎನ್ನಬಹುದು. ನಾಗನಿಗಂತೂ ಸಸ್ಯ ಶ್ಯಾಮಲವಾದ ತಂಪಾದ ತಾಣವೇ ಇಷ್ಟಕರ. ತುಳುನಾಡಿನಲ್ಲಿ ನಾಗಸಂಬಂಧಿ ದೇಗುಲಗಳು ರೂಪುಗೊಂಡಿರುವುದು ತಿಳಿದುಬರುತ್ತದೆ. (ಉದಾಹರಣೆಗೆ ಸುಬ್ರಹ್ಮಣ್ಯ,...