ವಿಶ್ವವಿದ್ಯಾನಿಲಯಗಳಿಗೆ ಏನಾಗುತ್ತಿದೆ? ಅಹಮದಾಬಾದ್ ವಿಶ್ವವಿದ್ಯಾನಿಲಯದ ಮಾನವಿಕ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರು ಮತ್ತು ಗಾಂಧಿ ಚಳಿಗಾಲದ ಶಾಲೆಯ ( Gandhi Winter School )ನಿರ್ದೇಶಕರಾಗಿ ನೇಮಕರಾಗಿದ್ದ ಇತಿಹಾಸಕಾರ ರಾಮಚಂದ್ರ ಗುಹಾ ಹುದ್ದೆಯನ್ನು ತಿರಸ್ಕರಿಸಿದ್ದಾರೆ. ಅ.16ರಂದು ಅವರ ನೇಮಕಾತಿಯಾದ್ದು ಅ.19ರಂದು ಅವರ ಆಯ್ಕೆಯನ್ನು ವಿರೋಧಿಸಿ ಅಭಾವಿಪದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅವರ ಆರೋಪಗಳು ಬಹಳ ವಿಚಿತ್ರವಾಗಿವೆ. ರಾಮಚಂದ್ರರನ್ನು ದೇಶದ್ರೋಹಿ ಎಂದು ಕರೆಯಲಾಗಿದೆ. ಹಿರಿಯ ಪ್ರಾಧ್ಯಾಪಕರೋರ್ವರು ಗುಹಾರನ್ನು ಗುಜರಾತ್ನಲ್ಲಿ ಪಾಠ ಮಾಡಲು ಬಿಡುವುದಿಲ್ಲ, ಅವರು ಮೋದಿ ವಿರೋಧಿ ಎಂದು ಮಿರರ್ಗೆ ಹೇಳಿದ್ದಾರೆ! ಈ ಬೆಳವಣಿಗೆಗಳನ್ನು ಕಂಡ ರಾಮಚಂದ್ರ ಗುಹಾ "ಪರಿಸ್ಥಿತಿ ತನ್ನ ನಿಯಂತ್ರಣವನ್ನು ಮೀರಿರುವುದರಿಂದ ನಾನು ಅಹಮದಾಬಾದ್ ವಿವಿಯನ್ನು ಸೇರುವುದಿಲ್ಲ" ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ. ರಾಮಚಂದ್ರ ಗುಹಾರನ್ನು ಟೀಕಿಸುವ ವರ್ಗವು ಅವರನ್ನು ಕಮ್ಯುನಿಸ್ಟ್ ಎಂದು ಕರೆದಿದೆ. ಆದರೆ ಗುಹಾ ತಮ್ಮ ಅನೇಕ ಬರಹಗಳಲ್ಲಿ ಕಮ್ಯನಿಸ್ಟರನ್ನೂ ಟೀಕಿಸಿದ್ದಿದೆ. ನಮ್ಮ ಮುಂದಿರುವ ಪ್ರಶ್ನೆಯೆಂದರೆ ರಾಮಚಂದ್ರ ಗುಹಾರಂತಹ ಜಾಗತಿಕ ಮಟ್ಟದ ಚಿಂತಕರನ್ನು ಒಂದು ವಿಶ್ವವಿದ್ಯಾನಿಲಯ ಹೊಂದುವುದು ತಪ್ಪೇ? ಅವರಿಗೆ ಆ ಸ್ಥಾನವನ್ನು ತುಂಬುವ ಯೋಗ್ಯತೆ ಇಲ್ಲವೇ? ದೆಹಲಿ ವಿಶ...