ಅಸ್ಸಾಮಿನಲ್ಲೊಬ್ಬರು ಮಂಗಳೂರಿನ ಗಾಂಧೀವಾದಿ
BK Bhandari with his wife Smt.Savithri
ಅಸ್ಸಾಮಿನ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕ ಮತ್ತು ಗಾಂಧಿ ಚಿಂತನೆಯ ಪ್ರಬಲ ಪ್ರತಿಪಾದಕರಲ್ಲಿ 'ಬಿ ಕೆ ಭಂಡಾರಿ'ಯವರ ಓರ್ವರು. ನಾನು ಈಶಾನ್ಯ ಭಾರತದ ಪ್ರವಾಸದಲ್ಲಿದ್ದಾಗ ಗುವಾಹಟಿಯ ಕಸ್ತೂರ್ಬಾ ಗಾಂಧಿ ಆಶ್ರಮದಲ್ಲಿ ಉಳಿದುಕೊಂಡಿದ್ದೆ. ಆ ಆಶ್ರಮದ ಗೋಡೆಯ ಮೇಲೆ ಅಸ್ಸಾಮಿನ ಮಹನೀಯರ ಭಾವಚಿತ್ರಗಳ ಮಧ್ಯೆ ಬಿ ಕೆ ಭಂಡಾರಿಯವರ ಚಿತ್ರವೂ ಇತ್ತು. ಕುತೂಹಲದಿಂದ ಅವರೆಲ್ಲರ ಬಗ್ಗೆ ಆಶ್ರಮವಾಸಿಗಳಲ್ಲಿ ಕೇಳುವಾಗ ಬಿ ಕೋಚಣ್ಣ ಭಂಡಾರಿಯವರ ಹೆಸರು ನನ್ನ ಕುತೂಹಲವನ್ನು ಕೆರಳಿಸಿತು. ಇದಂತು ಅಪ್ಪಟ ಕರಾವಳಿಯ ಬಂಟ ಸಮುದಾಯದ ಹೆಸರು !
ಬೈಲು ಕೋಚಣ್ಣ ಭಂಡಾರಿಯವರು 1935ರಲ್ಲಿ ಮಂಗಳೂರಿನ ಬಜ್ಪೆಯಲ್ಲಿ ವಾಸಿಸುತ್ತಿದ್ದರೆಂದು ಶಿವರಾಮ ಕಾರಂತರು ಹೇಳುತ್ತಾರೆ. ಇವರ ಪತ್ನಿ ಸಾವಿತ್ರಿಯವರು ಕಾರಂತರ ಪತ್ನಿ ಲೀಲಾರವರ ಸಹೋದರಿ. ಕಾಂಗ್ರೇಸಿನ ಸಕ್ರೀಯ ಕಾರ್ಯಕರ್ತರಾÀಗಿದ್ದ ಬಿ ಕೆ ಭಂಡಾರಿಯವರು ಪ್ರಸಿದ್ಧ ಸಮಾಜ ಸೇವಕ 'ಥಕ್ಕರ್ ಬಾಪಾ'ರ ಅ ನುಯಾಯಿಯಾಗಿದ್ದರು. 1933ರಲ್ಲಿ ಗಾಂಧೀಜಿ ಅಸ್ಪøಶ್ಯತೆಯ ವಿರುದ್ಧ ಅರಿವು ಮೂಡಿಸಲು 'ಹರಿಜನ ಸೇವಾ ಸಂಘ' ಸ್ಥಾಪಿಸಿ ಭಾರತದಾದ್ಯಂತ ಪ್ರವಾಸ ಆರಂಭಿಸಿದರು. ಥಕ್ಕರ್ ಬಾಪಾ ಈ ಸಂಘದ ಕಾರ್ಯದರ್ಶಿಯಾಗಿ ಅಸ್ಸಾಂನಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸೇವೆ ಮಾಡುತ್ತಿದ್ದರು. ಇದು ಬಿ ಕೆ ಭಂಡಾರಿಯವರನ್ನು ಆಕರ್ಷಿಸಿ 1936ರಲ್ಲಿ ಅಸ್ಸಾಂ ಕಡೆ ಪಯಣ ಬೆಳೆಸುವಂತೆ ಮಾಡಿತು. ಗಾಂಧೀಜಿಯವರ ಪ್ರವಾಸಗಳಲ್ಲಿ ಅವರ ಕಾರನ್ನು ತಾವೇ ಚಲಾಯಿಸುತ್ತಾರೆ. ಕಾಮರೂಪವನ್ನು ಕೇಂದ್ರವಾಗಿಟ್ಟುಕೊಂಡು ಸೇವೆಯನ್ನು ಅರಂಭಿಸಿದ ಭಂಡಾರಿಯವರು ಬಕ್ಸಾ ಎಂಬ ಜಾಗದ ಶೈಕ್ಷಣಿಕವಾಗಿ ಮತ್ತು ಸ್ವಚ್ಛತೆಯಲ್ಲಿ ಹಿಂದುಳಿದಿದ್ದ ಬೋರೊ ಮೊದಲಾದ ಬುಡಕಟ್ಟುಗಳ ಸೇವೆಯನ್ನು ಮಾಡುತ್ತಾರೆ. ಇದು ದಟ್ಟವಾದ ಕಾಡಿನಿಂದ ಆವೃತವಾದ ಸ್ಥಳವಾಗಿದ್ದು ಮಲೇರಿಯಾ, ಕಾಲಾರಗಳಿಂದ ಬಾಧಿತವಾಗಿತ್ತು. ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಾರೆ.
ಕೋಚಣ್ಣ ಭಂಡಾರಿಯವರ ಮೊದಲ ಪತ್ನಿ ಸುಮತಿಯವರು ಅಸ್ಸಾಮಿನಲ್ಲಿ ಮರಣಹೊಂದಿದ ನಂತರ ಅವರು ಮಂಗಳೂರು ಮೂಲದ 'ಸಾವಿತ್ರಿ ಆಳ್ವ'ರನ್ನು ವಿವಾಹವಾಗುತ್ತಾರೆ. ಸಾವಿತ್ರಿಯವರು ತುಳು ಮೂಲದವರಾದರೂ ಅಸ್ಸಾಮಿ ಕಲಿತು ಅಸ್ಸಾಮಿ ಬಟ್ಟೆ ತೊಡಲು ಆರಂಭಿಸಿದರು. ಹೈನುಗಾರಿಕೆ, ಜೇನು, ಹೂದೋಟ, ತರಕಾರಿ ಮೊದಲಾದವನ್ನು ಬೆಳೆಸುವ ಅರಿವನ್ನು ಇವರು ಅಲ್ಲಿಯ ಮಹಿಳೆಯರಲ್ಲಿ ಮೂಡಿಸಿದರು. ಕೋಚಣ್ಣ ಭಂಡಾರಿಯವರಿಗೆ ಡಾ.ಸುಮನ್, ನಯನ್ ಭಂಡಾರಿ ಶರ್ಮ, ಶೋಭನ್ ಭಂಡಾರಿ ದೇಕಾ ಮತ್ತು ಮಲಯ ಭಂಡಾರಿ ದೇಕಾ ಎಂಬ ಪುತ್ರಿಯರು ಹಾಗೂ ಮೋಹನದಾಸ್ ಎಂಬ ಓರ್ವ ಪುತ್ರ. ಇವರಲ್ಲಿ ಡಾ. ಸುಮನ್ ಮರಣಹೊಂದಿದ್ದು ಉಳಿದವರೆಲ್ಲರೂ ಕುಟುಂಬದೊಂದಿಗೆ ಅಸ್ಸಾಮಿನಲ್ಲೇ ನೆಲೆಸಿದ್ದಾರೆ.
| Smt. Nayan Sharma Bhanadri, daughter of BK Bhandari and Charan |
ಕೋಚಣ್ಣ ಭಂಡಾರಿಯವರು ಅಸ್ಸಾಮಿನ ಬರಮದಲ್ಲಿ ಆರಂಭಿಸಿದ ಅಸ್ಸಾಂ ಸೇವಾ ಸಂಘ್ ಬಕ್ಸಾ, ಬರಮ ಮೊದಲಾದ ಹಿಂದುಳಿದ ಪ್ರದೇಶಗಳಲ್ಲಿ ಶಾಲೆಗಳು, ವಸತಿ ನಿಲಯಗಳ ಮತ್ತು ಆರೋಗ್ಯ ಕೇಂದ್ರಗಳನ್ನು ಆರಂಭಿಸಿತು. ಭಂಡಾರಿಯವರು ಅಸ್ಸಾಮಿನಲ್ಲಿ ಸೇವೆಯನ್ನು ಆರಂಭಿಸುವಾಗ ಅನೇಕ ಕೊರತೆಗಳಿದ್ದವು. ಸಂಘದ ಕಟ್ಟಡದ ನಿರ್ಮಾಣದ ಕೆಲಸವನ್ನು ಸ್ವತಃ ತಾವೇ ಮಾಡಿದ್ದರು. ಈ ಸಂಘದ ಅಡಿಯಲ್ಲಿ ಗೋರೊ, ಖಾಸಿ ಮೊದಲಾದ ಗಿರಿ ಪ್ರದೇಶಗಳಲ್ಲಿ ಕುಷ್ಠರೋಗಿಗಳ ಚಿಕಿತ್ಸಾ ಕೇಂದ್ರವನ್ನು ತೆರೆದಿದ್ದರು. ಮಂಗಳೂರಿನ ಬೈಲು ಕೋಚಣ್ಣ ಭಂಡಾರಿಯವರು ಅಸ್ಸಾಮಿನ ಜನತೆಯ ಸೇವೆಯನ್ನು ಮಾಡಿ ಅಜರಾಮರರಾಗಿದ್ದಾರೆ.
ಅಸ್ಸಾಮಿನ ಜನರು ಭಂಡಾರಿಯವರಲ್ಲಿ ಓರ್ವ ಸಂತನನ್ನು ಕಂಡಿದ್ದಾರೆ. ಗಾಂಧಿಯ ಕರೆಗೆ ಓಗೊಟ್ಟು ಅಸ್ಸಾಮಿಗೆ ಧಾವಿಸಿ ತನ್ನ ಜೀವನದ ಬಹುತೇಕ ಕಾಲವನ್ನು ಜನಸೇವೆಗೆ ಮೀಸಲಿಟ್ಟ ಮಹಾ ಗಾಂಧೀವಾದಿ ಬೈಲು ಕೋಚಣ್ಣ ಭಂಡಾರಿಯವರು ಕರಾವಳಿಯ ಹೆಮ್ಮೆ.
![]() |
| Charan's Article In Prajavani on BK Bhandari, Oct.2 2018 |
ZÀgÀuï
LªÀ£ÁðqÀÄ
¢éwÃAiÀÄ
JA¹eÉ
ªÀÄAUÀ¼ÀUÀAUÉÆÃwæ
ªÀÄAUÀ¼ÀÆgÀÄ
«±Àé«zÁ央AiÀÄ
9740249793

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Thank You